ಬೀದರ್ ಮುಂದುವರೆದ ವರುಣ ಅರ್ಭಟ | ಜಿಲ್ಲೆಯ ರೈತರಿಗೆ ಮತ್ತು ಅಧಿಕಾರಿಗಳಿಗೆ ಸಂಸದ ಖಂಡ್ರೆ ಸಂದೇಶ

ಬೀದರ್ ಮುಂದುವರೆದ ವರುಣ ಅರ್ಭಟ | ಜಿಲ್ಲೆಯ ರೈತರಿಗೆ ಮತ್ತು ಅಧಿಕಾರಿಗಳಿಗೆ ಸಂಸದ ಖಂಡ್ರೆ ಸಂದೇಶ

ಬೀದರ್ :  ಆಸ್ನಾ ಚಂಡಮಾರುತದಿಂದ ಬೀದರ ಜಿಲ್ಲೆಯಲ್ಲಿ ಭಾರೀ ಮಳೆಯು ಮುಂದುವರೆದಿರುವುದರಿಂದ, ಸಂಸದ ಸಾಗರ ಖಂಡ್ರೆ ಅವರು ಬೀದರ ಲೋಕಸಭಾ ಕ್ಷೇತ್ರದ ಎಲ್ಲಾ ರೈತರು ಸುರಕ್ಷಿತವಾಗಿರಬೇಕು ಮತ್ತು ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮಳೆಯಿಂದಾಗಿ ಸಂಭವಿಸಿದ ಹಾನಿಗಳನ್ನು ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡುವಂತೆ ತಿಳಿಸಿದ್ದಾರೆ. ಅಲ್ಲದೆ, ಸಂಸದ ಸಾಗರ ಖಂಡ್ರೆ ಅವರು ಅಧಿಕಾರಿಗಳು ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲಿದ್ದು, ಜನರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ಮಳೆ 2 ಸೆಪ್ಟೆಂಬರ್ ವರೆಗೆ ಮುಂದುವರಿಯುವ ನಿರೀಕ್ಷೆಯಿದ್ದು, ಅದು ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯೂ ಇದೆ,ಹಾಗಾಗಿ ಮುನ್ನಚರಿಕೆ ವಹಿಸಿವಂತೆ ಮನವಿ ಮಾಡಿದ್ದಾರೆ

 

Share this post

Post Comment