ಮೇರಾ ಭಾರತ್ ಮಹಾನ್ ಸಂಸ್ಥೆಯಿಂದ ಸರಳ ಸಾಮೂಹಿಕ ವಿವಾಹ

ಮೇರಾ ಭಾರತ್ ಮಹಾನ್ ಸಂಸ್ಥೆಯಿಂದ ಸರಳ ಸಾಮೂಹಿಕ ವಿವಾಹ

ಬೀದರ್‌ : ನಗರದ ಮೇರಾ ಭಾರತ್ ಮಹಾನ್ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆ ವತಿಯಿಂದ ಬೀದರ್ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರಿಗಾಗಿ ಸಪ್ಟೆಂಬರ್ 26ರಂದು ಸರಳ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ.

ಉತ್ರರ ಕರ್ನಾಟಕ ಸುದ್ದಿವಾಹಿನಿಯ ಜೊತೆ ಮಾತಾನಾಡಿದ ರಾಹುಲ್‌ ಡಾಂಗೆ
ಉತ್ರರ ಕರ್ನಾಟಕ ಸುದ್ದಿವಾಹಿನಿಯ ಜೊತೆ ಮಾತಾನಾಡಿದ ರಾಹುಲ್‌ ಡಾಂಗೆ

ಸಾಮೂಹಿಕ ವಿವಾಹದ ವಿಚಾರವಾಗಿ ಉತ್ತರ ಕರ್ನಾಟಕ ಸುದ್ದಿ ವಾಹಿನಿಗೆ ಮಾತನಾಡಿದ ಮೇರಾ ಭಾರತ್ ಮಹಾನ್ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆಯ ಸದಸ್ಯ ರಾಹುಲ್ ಡಾಂಗೆ, ಇತ್ತೀಚಿನ ದಿನಗಳಲ್ಲಿ ಯುವ ಜನತೆಯು ಮದುವೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಸೌಲಭ್ಯ ಮಾಡಿ ಅದ್ದೂರಿ ಮದುವೆಗಳನ್ನ ಮಾಡಿಕೊಳ್ಳುತ್ತಾರೆ .ಇದರಿಂದ ಅವರು ಸಾಲದ ಸುಳ್ಳಿಗೆ ಕೂಡ ಸಿಲುಕುತ್ತಾರೆ.

ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತ ವಧು ವರರಿಗೆಯಾಗಿ ಸರಳ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

Share this post

Post Comment